ಭಾನುವಾರ, ಸೆಪ್ಟೆಂಬರ್ 21, 2014

ಯುಗಾದಿ 2014

ಜಯಿಸಲಿ ಧರ್ಮ ಎಂದಿನಂತೆ
ಭಾರತಿಯ ನಯನ ಅರಳಲಿ
ಕಾಣಲಿ ಹೊನ್ನ ಕಮಲದಂತೆ
ಒಮ್ಮನಸ್ಸಿನ ಒಗ್ಗಟ್ಟು ಜಯ ತರಲಿ

ಆದಿ ಕಾಲದಿ ನಡೆದು ಬಂದಿಹ
ಸೃಷ್ಟಿಕರ್ತನ ಲೀಲೆ ಇದು,
ದೂರದಿಂದಲಿ ನಡೆದುಬಂದಿಹ
ಅಲ್ಪನ ಕಣ್ಣಿಗೆ ಹಬ್ಬವಿದು!

ಗುರುವಾರ, ಸೆಪ್ಟೆಂಬರ್ 18, 2014

ಹೊಸ ಜಾಗ

ಬಂದು ನಿಂತ ವೇಳೆ
ಮೊಳಗಿತು ಸು-ಕಹಳೆ
ಗುಡುಗಿ, ಬಿದ್ದಿತು ಮಳೆ
ಕೊಚ್ಚೇ ಹೋಯಿತಿ ಬಹುದಿನಗಳ ಕೊಳೆ !!

ಭಾನುವಾರ, ಫೆಬ್ರವರಿ 16, 2014

ಅಂತರಂಗದ ಅಳಲು

ಕುಂದುತಿದೆ ದೇಶದ ರಾಜಕೀಯ
ಆಳುವನೇ ಮತ್ತೆ ಪರಕೀಯ |?
ಕಾಣುತಿಹೆ ನಾ ಕಳ್ಳರ
ನೋಡುತಿಹೆ ನಾ ಸುಳ್ಳರ |
ಬಾಡುತಿದೆ ನಾಡು
ನಶಿಸುತಿವೆ ಕಾಡು |
ಭಾರತ ಮಾತೆಯು ಅಳುತಿಹಳು
ಶಾಂತಿ ಸೌಹಾರ್ದವ ಬೇಡುತಿಹಳು |
ಏನು ಮಾಡಲಿ ತಿಳಿಯದಾಗಿದೆ,
.
.
.
ಬಾಡಿ ಹೋದ ಬಳ್ಳಿಯಿಂದ ಹೂ ಅರಳಬಲ್ಲದೆ??

ಶುಕ್ರವಾರ, ಫೆಬ್ರವರಿ 14, 2014

ಚೇತನಕ್ಕೆ ಕೋರಿಕೆ

ಓ ಬೆಳಕೆ, ಮರಳಿ ಬಾ ಎಲ್ಲ ಎಲ್ಲೆ ಮೀರಿ
ತೋರು ಬಾ ನೀ ಮುಂದಿನ ದಾರಿ |
ಅಂಜಿಕೆ ನನ್ನ ಎಂದಿನ ವೈರಿ
ತೇರನು ಏರಿ, ನಗುವನು ಬೀರಿ
ಸೆಳೆಯಲು ಬಾ . . . ಚಿತ್ತ ಚೋರಿ ||