ಭಾನುವಾರ, ಫೆಬ್ರವರಿ 16, 2014

ಅಂತರಂಗದ ಅಳಲು

ಕುಂದುತಿದೆ ದೇಶದ ರಾಜಕೀಯ
ಆಳುವನೇ ಮತ್ತೆ ಪರಕೀಯ |?
ಕಾಣುತಿಹೆ ನಾ ಕಳ್ಳರ
ನೋಡುತಿಹೆ ನಾ ಸುಳ್ಳರ |
ಬಾಡುತಿದೆ ನಾಡು
ನಶಿಸುತಿವೆ ಕಾಡು |
ಭಾರತ ಮಾತೆಯು ಅಳುತಿಹಳು
ಶಾಂತಿ ಸೌಹಾರ್ದವ ಬೇಡುತಿಹಳು |
ಏನು ಮಾಡಲಿ ತಿಳಿಯದಾಗಿದೆ,
.
.
.
ಬಾಡಿ ಹೋದ ಬಳ್ಳಿಯಿಂದ ಹೂ ಅರಳಬಲ್ಲದೆ??

ಶುಕ್ರವಾರ, ಫೆಬ್ರವರಿ 14, 2014

ಚೇತನಕ್ಕೆ ಕೋರಿಕೆ

ಓ ಬೆಳಕೆ, ಮರಳಿ ಬಾ ಎಲ್ಲ ಎಲ್ಲೆ ಮೀರಿ
ತೋರು ಬಾ ನೀ ಮುಂದಿನ ದಾರಿ |
ಅಂಜಿಕೆ ನನ್ನ ಎಂದಿನ ವೈರಿ
ತೇರನು ಏರಿ, ನಗುವನು ಬೀರಿ
ಸೆಳೆಯಲು ಬಾ . . . ಚಿತ್ತ ಚೋರಿ ||